ಶಿಲ್ಪಿ

ಭವ್ಯ ಭಾರತದ ಕುಶಲ ತೋಟಿಗ
ನಾಡಿನ ಭವಿಷ್ಯದ ಸಾಕಾರ ಶಿಲ್ಪಿ
ನಿನಗೆಷ್ಟೊಂದು ಪೂಜಿಸಿದರೂ…
ಪ್ರೀತಿಯಲಿ ಗೌರವಿಸಿದರೂ
ನಿನ್ನಾ.. ಮಹಾನ್ ತ್ಯಾಗ-ಭೋದನೆಗೆ ಬೆಲೆಯಿಲ್ಲ.

ಇಂದು.. ಅದು ಮಾಯವಾಗುತಿಹದು
ನಿಷ್ಠೆ-ಗೌರವ-ಹುಸಿಯಾಗುತಿಹವು
ನಾಚಿಕೆ-ಸಂಕೋಚ ದೂರ ತಳ್ಳುತ
ಹಗಲಿನಲಿ ಹರಾಜು ಮಾಡುತಿಹರು
ಪೂಜ್ಯ.. ಶಿಕ್ಷಕ.. ವೃತ್ತಿಯನು…

ಕೀಳಾಗಿಸಿ ಅಪಹಾಸ್ಯ ಮಾಡುತಿಹರು
ಅಸ್ಪೃಶ್ಯತೆಯಲಿ ಶಿಕ್ಷಕನು ತಳ್ಳುತ
ನಿಜದಲಿ ಗುರುವನರಿಯದೆ…
ಬರಿ-ಪೊಳ್ಳು ಸಭೆ-ಭಾಷಣದಲಿ ಹೊಗಳುತಿಹರು

ನವನಾಗರೀಕತೆಯ ನಿರ್ಮಾಪಕ ಎನ್ನುತಲೇ
ಅರಳಿ-ಬೆಳಗುವ ಕುಸುಮಗಳ ಶಿಲ್ಪಿ
ಅಧಿಕಾರಶಾಹಿ-ಕೊಳಚೆಯ
ಭವಿಷ್ಯದಲಿ ಆತಂಕದ ಘಂಟೆಯ ಬಾರಿಸುತ
ಶಿಕ್ಷಕನನು ಕಡೆಗಣಿಸಿ… ನಿರ್ಲಕ್ಷಿಸಿ…
ನಾಗರೀಕತೆಯ ನಾಶದ ಸಮಾಧಿಯನು ನಿರ್ಮಿಸುತಿಹರು.

***

 

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೋರುಮದಲಾವಾ ಖೇಲ ಖೇಲ
Next post ಹೊತ್ತು ಮುಳುಗಿತು ಜಗದಿ ಕತ್ತಲಾದಿತು

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys